ಕಿತ್ತೂರು ರಾಣಿ ಚಿನ್ನಮ್ಮ ವೃತ್ತ ಹುಬ್ಬಳ್ಳಿ ಒಂದು ನೂರ ಐವತ್ತು ವರ್ಷಗಳ ಹಿಂದೆ ಇಂಗ್ಲೆಂಡಿನಿಂದ ಭಾರತಕ್ಕೆ ವ್ಯಾಪರಕ್ಕೆಂದು ಬಂದ ಇಂಗ್ಲಿಷರ ಕಂಪನಿ ಕ್ರಮೇಣ ಇಲ್ಲಿ ಸಮ್ರಾಜ್ಯವನ್ನು ಕಟ್ಟಲು ಪ್ರಾರಂಭಿಸಿತ್ತು. ಆಗಲೆ ಭಾರತದ ಹಲವು ಪ್ರದೇಶಗಳನ್ನು ತನ್ನ ಅಂಗೈಯಲ್ಲಿ ಸೇರಿಸಿಕೊಂಡಿತ್ತು. ಹಲವು ರಾಜರೂ ಅವರಿಗೆ ತಲೆಬಾಗಿ ತಮ್ಮ ಸಿಂಹಾಸನವನ್ನು ಉಳಿಸಿಕೊಂಡಿದ್ದರು. ಕನ್ನಡನಾಡಿನ ಒಬ್ಬ ವೀರವನಿತೆ ಇಂಗ್ಲಿಷರ ಸೈನ್ಯವನ್ನು ಎದುರಿಸಿ ನಿಂತಳು, ಸೈನ್ಯ ತನ್ನ ಕೋಟೆಯನ್ನು ಮುತ್ತಿದಾಗ ಈ ಕೋಮಲೆ ಸೈನ್ಯದ ಕಣ್ಣಾದಳು, ಸ್ಪೂರ್ತಿಯಾದಳು, ತಾನೇ ಕುದುರೆ ಏರಿ ಕತ್ತಿ ಹಿಡಿದು ಹೋರಾಡಿದಳು. ಈ ವೀರಶ್ರೀಯ ಹೆಸರು ಕಿತ್ತೂರು ಚೆನ್ನಮ್ಮ. ಹೀಗೆಯೇ ವೀರಾವೇಶದಿಂದ ಇಂಗ್ಲಿಷರೊಡನೆ ಹೋರಾಡಿ ಪ್ರಾಣ ಒಪ್ಪಿಸಿದ ಝಾನ್ಸಿ ರಾಣಿ ಲಕ್ಷ್ಮೀಬಾಯಿಯ ಹೆಸರನ್ನು ನಾವೆಲ್ಲ ಕೇಳಿದ್ದೇವೆ, ಅಲ್ಲವೆ? ವೀರ ರಾಣಿ ಲಕ್ಷ್ಮೀಬಾಯಿ ಸ್ವಾತಂತ್ರಕ್ಕಾಗಿ ಪ್ರಾಣ ಒಪ್ಪಿಸುವುದಕ್ಕೆ ಸುಮಾರು ಮೂವತೈದು ವರ್ಷಗಳ ಹಿಂದೆ ಕನ್ನಡನಾಡಿನಲ್ಲಿ ಈ ದಿವ್ಯತಾರೆ ಬೆಳಗಿತು. Kittur Rani Chennamma Kitturu rani Chennamma is the first Indian female ruler to lead an armed rebellion against the British East India Company in 1824. #Kitturu #Belagavi #Dharawada #Hubbali #KannadaNadu Karnataka #Kannadathi #India













