ಇಡೀ ಭಾರತಕ್ಕೆ ಸ್ವಾತಂತ್ರ್ಯ ಬಂದರೂ ಗೋವಾದ್ದು ಬೇರೆ ಕಥೆ..!| Goa Liberation
ಭಾರತಕ್ಕೆ ಸ್ವಾತಂತ್ರ್ಯ ಬಂದದ್ದು ಅಗಸ್ಟ್ 14 1947ರ ಮಧ್ಯರಾತ್ರಿ,
ಬ್ರಿಟಿಷರು ಭಾರತವನ್ನು ಬಿಟ್ಟು ತಮ್ಮ ತಾಯ್ನುಡಿಗೆ ಮರಳುತ್ತಿದ್ದ ಮಧ್ಯರಾತ್ರಿ. ಇಡೀ ಭಾರತಕ್ಕೆ ಭಾರತವೇ ಸಂಭ್ರಮ ಪಡುತ್ತಿದ್ದ ರಾತ್ರಿ, ಭಾರತ ಇನ್ನು ಯಾರ ಅಡಿಯಲ್ಲಿಯೂ ಇಲ್ಲ ಎಂಬ ಸಂತಸದ ಕ್ಷಣವನ್ನು ಎಲ್ಲ ಭಾರತೀಯರು ಸಂತಸದಿಂದ ಸ್ವೀಕರಿಸಿದ್ದರು. ಆದರೆ ಭಾರತಕ್ಕೆ ಸ್ವಾತಂತ್ರ್ಯ ಬಂತು ಅಂತ ನಾವು ಅನ್ಕೊಂಡಿದಿವಿ. ಸಂಪೂರ್ಣ ಭಾರತಕ್ಕೆ ಸ್ವಾತಂತ್ರ್ಯ ಬಂದಿರಲಿಲ್ಲ. ಹೌದು ಅಂಥ ನತದೃಷ್ಟ ರಾಜ್ಯಗಳಲ್ಲಿ ಗೋವಾ ಕೂಡ ಒಂದು. ಗೋವಾ ಇನ್ನು ವಿದೇಶಿ ಸರ್ಕಾರದ ಅಡಿಯಲ್ಲಿ ನೋವು ಹಿಂಸೆಯನ್ನು ಅನುಭವಿಸುತ್ತಿತ್ತು. ಗೋವಾಕ್ಕೆ ಸ್ವಾತಂತ್ರ್ಯ ಬಂದದ್ದು 1961 ಡಿಸೆಂಬರ್ 19ರಂದು. ಅಂದರೆ ನಮಗೆ ಸ್ವಾತಂತ್ರ್ಯ ಬಂದ 14 ವರ್ಷಗಳ ನಂತರ. ಆಪರೇಶನ್ ವಿಜಯ್ ಅನ್ನುವ ಮಿಲಿಟರಿ ಕಾರ್ಯಾಚರಣೆಯ ಮೂಲಕ ಗೋವಾ ರಾಜ್ಯ ಪೋರ್ಚುಗೀಸ್ ಆಡಳಿತದಿಂದ ಮುಕ್ತಿ ಹೊಂದಿತು. ಎಷ್ಚು ವರ್ಷಗಳ ನಂತರ ಗೊತ್ತಾ — 451 ವರ್ಷಗಳ ನಂತರ. ಅಂದರೆ ನಾಲ್ಕೂವರೆ ಶತಮಾನ..
ಗೋವಾ. ಸ್ನೇಹಿತರೆ, ಗೋವಾ ಅಂದಾಗ ನಮಗೆ ಕಣ್ಣ ಮುಂದೆ ಬರೋದು ಆ ಬೀಚ್ ಗಳು, ಆ ಚರ್ಚ್ ಗಳು, ಹಾಗೆ ಬಹುತೇಕರಿಗೆ ಗೋವಾ ಅಂದ್ರೆ ಅಗ್ಗದ ದರದಲ್ಲಿ ಸಿಗುವ ಮದ್ಯ. ಗೋವಾ ಟ್ರಿಪ್ ಮಾಡೋಕೆ ಎಲ್ಲರೂ ಹಾತೊರೆಯುತ್ತಾರೆ. ಗೋವಾ ಬ್ಯೂಟಿಫುಲ್ ಆಗಿದೆ. ಆದರೆ ಗೋವಾದ ಇಂದಿನ ಸುಂದರವಾದ ನೋಟದ ಹಿಂದೆ ಒಂದು ಕರಾಳ ಇತಿಹಾಸ ಇದೆ ಎಂದು ನಿಮಗೆ ಗೊತ್ತಾ? ಬಹುಶಃ ಗೊತ್ತಿಲ್ಲ. ಆದರೆ ಇವತ್ತು ನಮ್ಮ ಈ ವಿಡಿಯೋ, ನಿಮಗೆ ಗೋವಾದ ಕಡು ಸಂಕಷ್ಟದ ದಿನಗಳು ಹಾಗೂ ಗೋವಾ ಸ್ವಾತಂತ್ರ್ಯ ಪಡೆದ ರೋಚಕ ಕಥೆಯನ್ನು ಹೇಳ್ತೀವಿ ಬನ್ನಿ.
ಗೋವಾ ಇತಿಹಾಸ ಗೋವಾ ಭಾರತದ ಪಶ್ಚಿಮ ಕರಾವಳಿಯಲ್ಲಿ ಇರುವ ಒಂದು, ಕರ್ನಾಟಕದ ಪಕ್ಕದಲ್ಲೇ ಇರುವ ನಮ್ಮ ಬೆಳಗಾವಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಿಗೆ ಹೊಂದಿಕೊಂಡಿರೋ ಒಂದು ಪುಟ್ಟ ರಾಜ್ಯ. ಇದರ ಒಟ್ಟಾರೆ ಎರಿಯಾ 3702 ಚದರ ಕಿಮಿ. ಈ ಪ್ರದೇಶದ ಅಂದ್ರೆ ಗೋವಾದ ಹೆಸರು ಅನೇಕ ವೈದಿಕ ಗ್ರಂಥಗಳಲ್ಲಿ ಕಾಣೋಕೆ ಸಿಗುತ್ತದೆ. ವೈದಿಕ ಗ್ರಂಥಗಳಲ್ಲಿ ಗೋಮಾಂತಕ ಎಂದು ಕರೆಯುತ್ತಿದ್ದರು. ಹಾಗಾದರೆ ಗೋಮಾಂತಕ ಅಂದ್ರೆ ಏನು? ಇದರ ಅರ್ಥ ದನಗಳನ್ನು ಮೇಯಿಸಬಹುದಾದ ಸ್ಥಳ ಎಂದು. ಇನ್ನೊಂದು ಅರ್ಥದಲ್ಲಿ ಗೋಮಾಂತಕ ಅಂದ್ರೆ ಗೋವುಗಳ ಪವಿತ್ರ ಸ್ಥಳ ಅಂತಾ ಕೂಡ ಆಗುತ್ತೆ. ಅಂದ್ರೆ ಅಂದು ಗೋವಾ ಪ್ರದೇಶದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಗೋವುಗಳನ್ನು ಸಾಕುತ್ತಿದ್ದರು ಎಂಬ ಬಗ್ಗೆ ಸಾಕ್ಷಿ ನೀಡುತ್ತದೆ ಈ ಹೆಸರು. ಇದರೊಂದಿಗೆ ಪುರಾಣಗಳ ಪ್ರಕಾರ ಈ ನಾಡು ಕೃಷ್ಣನ ದ್ವಾರಕೆಯ ಭಾಗವಾಗಿತ್ತು ಎಂದು ಕೂಡಾ ನಂಬಲಾಗುತ್ತದೆ. ಇಷ್ಟೇ ಅಲ್ಲದೆ, 5ನೇ ಶತಮಾನದ ಖಗೋಳ ವಿಜ್ಞಾನಿ ವರಾಹಮಿಹಿರನು ತನ್ನ ಬೃಹತ್ ಸಂಹಿತೆ ಗ್ರಂಥದಲ್ಲಿ ಗೋವಾವನ್ನು ಗೋಮಂತ ಎಂದು ಕೂಡಾ ಕರೆದಿದ್ದಾನೆ. ಕದಂಬ ರಾಜನಾದ ವಿಷ್ಣುಚಿತ್ತನ ಒಂದು ಶಾಸನದಲ್ಲಿ ಗೋವಾವನ್ನು ಗೋಪಕಪಟ್ಟಣ ಅಂತಾ ಕರೆಯುತ್ತಿದ್ದರು.
ಗೋವಾದಲ್ಲಿ ಜನರ ಇತಿಹಾಸ lower Paleolithic era ತನಕ ಹಿಂದೆ ಹೋಗುತ್ತದೆ. ಇಲ್ಲಿಯ ಮೂಲ ನಿವಾಸಿಗಳು ಎಂದರೆ, ಗೌಡರು, ಕುಣಬಿಗಳು, ವೆಲಿಪ್, ಖಾರ್ವಿಗಳು ಹಾಗೂ ಪ್ರೋಟೋ ಆಸ್ಠ್ರಲಾಯ್ಡ್ ಜನಾಂಗವಾದ ಮುಂಡಾರಿಗಳು ಅಂತ ಹೇಳಲಾಗುತ್ತದೆ. ಇವರನ್ನು ಮೂಲ ಗೋಯೆಂಕಾರ್ ಅಂತಾ ಕರೆಯುತ್ತಾರೆ. ಮೌರ್ಯರ ಕಾಲದಲ್ಲಿ ಗೋವಾ ಬೌದ್ಧ ಧರ್ಮ ಧರ್ಮದ ಪ್ರಭಾವಕ್ಕೆ ಒಳಗಾಗಿತ್ತು. ನಂತರ ಗೋವಾ ಒಂದು ಪ್ರಮುಖ ವಾಣಿಜ್ಯ ಕೇಂದ್ರವಾಗಿ ಬೆಳೆದಿದ್ದು ಶಾತವಾಹನರ ಅಡಿಯಲ್ಲಿ, ಈ ಸಂದರ್ಭದಲ್ಲಿ ರೋಮನ್ ವ್ಯಾಪಾರಿಗಳು ಗೋವಾ ಬಂದರಿನ ಮೂಲಕ ವಾಣಿಜ್ಯ ವ್ಯವಹಾರಗಳನ್ನು ಶಾತವಾಹನರ ಜೊತೆ ಮಾಡ್ತಾ ಇದ್ದರು.
ಆದರೆ ಮುಂದೆ ಗೋವಾ mass migration ಅನ್ನು ಕಾಣುತ್ತೆ. ಮೊದಲ ಬಾರಿಗೆ ಗೋವಾದ ನೆಲದ ಮೇಲೆ ಅನ್ಯ ಜನಾಂಗದವರು ಕಾಲಿಟ್ಟಿದ್ದರು. ಅವರೇ GSB ಗಳು ಅಂದ್ರೆ ಗೌಡ ಸಾರಸ್ವತ ಬ್ರಾಹ್ಮಣರು. ಇವರು ಕ್ರಿ.ಪೂ 700ನೇ ಇಸವಿಯಲ್ಲಿಯೇ ಗೋವಾಕ್ಕೆ ಬರ್ತಾರೆ. ಇವರು ಮೂಲತಃ ಸರಸ್ವತಿ ನದಿ ತೀರದವರು ಅಂದ್ರೆ ಇವತ್ತಿನ ಬಿಹಾರ ಮತ್ತು ಬಂಗಾಳ ಪ್ರಾಂತ್ಯದಿಂದ ಅಂತಾ ಹೇಳಲಾಗುತ್ತದೆ. (present day bihar and Bengal).
ಈ GSB ಸಮುದಾಯ ಗೋವಾದಲ್ಲಿ ಭೋಜ, ಚೇಡಿಯ ಹಾಗೂ ಸಾರಸ್ವತ ಎಂಬ ಮೂರು ಗುಂಪಾಗಿ ಗೋವಾಗೆ ಬರ್ತಾರೆ. ಇವರು ಗೋವಾಗೆ ಬಂದ ಮೊದಲ ಇಂಡೋ ಆರ್ಯನ್ ಸಮುದಾಯ ಅಂತಾ ಹೇಳಲಾಗುತ್ತದೆ. ನಮ್ಮ ಗಿರೀಶ್ ಕಾರ್ನಾಡ್, ಅನಂತನಾಗ್, ಶಂಕರ್ ನಾಗ್, ರಾಧಿಕಾ ಪಂಡಿತ್, ಕೆನರಾ ಬ್ಯಾಂಕ್ ಸ್ಥಾಪಕ ಎ.ಸುಬ್ಬಾರಾವ್ ಪೈ, ಮಣಿಪಾಲ್ ಯುನಿವರ್ಸಿಟಿ ಹಾಗೂ ಸಿಂಡಿಕೇಟ್ ಬ್ಯಾಂಕ್ ಸ್ಥಾಪಕ ಟಿ.ಎಂ.ಎ ಪೈ, ಹೀಗೆ ಇವರೆಲ್ಲರೂ ಜಿಎಸ್ಬಿ ಸಮಾಜದವರು. ಈಗ ಯಾಕೆ ಇವರ ಮೇಲೆಯೇ ಒತ್ತು ಕೊಟ್ಟು ಮಾತನಾಡ್ತಾ ಇದೀರಾ ಅಂತಾ ನೀವು ಕೇಳಬಹುದು. ಇದಕ್ಕೆ ಉತ್ತರ ನಿಮಗೆ ಮುಂದೆ ಸಿಗುತ್ತದೆ. ಈ GSB ಗಳು ಮತ್ತೆ ಗೋವಾದಿಂದ ಜೀವ ಹಾಗೂ ತಮ್ಮ ದೇವರನ್ನು ಹೊತ್ತು ಕೊಂಡು ಹೋಗುವ ಇತಿಹಾಸ ಮುಂದೆ ನಿಮ್ಮ ಕಣ್ಣಲ್ಲಿ ನೀರು ತರಿಸಲಿದೆ.
ಈ ಕಮ್ಯೂನಿಟಿಯ ವಿಶೇಷ ಏನೆಂದರೆ ಇವರು ಬ್ರಾಹ್ಮಣರು ಹೌದು, ಆದರೆ ವ್ಯಾಪಾರಿಗಳು ಕೂಡ ಹೌದು. ತಮ್ಮ ಬುದ್ಧಿವಂತಿಕೆಯ ಮೂಲಕ ಗೋವಾ ಮೂಲಕ ನಡೆಯುತ್ತಿದ್ದ ವಾಣಿಜ್ಯ ಚಟುವಟಿಕೆಗಳಲ್ಲಿ ಬಹುಪಾಲು ಇವರದೇ ಆಗಿತ್ತು. ವ್ಯಾಪಾರಗಳಲ್ಲಿ ಇವರ domination ಹೇಗಿತ್ತು ಎಂಬುದನ್ನು ನಾರ್ವೆ ದೇಶದ “Social Anthropologist Harald Tambs Lynche” ತಮ್ಮ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ. ಕ್ರಿ.ಶ 13ನೇ ಶತಮಾನದವರೆಗೆ ಈ ಸಮುದಾಯ ಶಾಂತಿಯುತವಾಗಿ ವ್ಯಾಪಾರ ವ್ಯವಹಾರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿತ್ತು.
ಆದರೆ ಕೆಲವೇ ವರ್ಷಗಳಲ್ಲಿ ಜಿಎಸ್ಬಿ ಸಮುದಾಯದ ಇತಿಹಾಸ ಹಾಗೂ ಗೋವಾದ ಇತಿಹಾಸ ಸಂಪೂರ್ಣವಾಗಿ ಬದಲಾಗುವುದರಲ್ಲಿತ್ತು. ಕ್ರಿ.ಶ 1312ರಲ್ಲಿ ಮೊದಲಬಾರಿಗೆ ಮಲ್ಲಿಕ್ ಕಾಫೂರ್ ಎಂಬ ಮುಸ್ಲಿಂ ಸೇನಾ ನಾಯಕ ಗೋವಾದ ಮೇಲೆ ದಾಳಿ ಮಾಡಿ ವಶಪಡಿಸಿಕೊಳ್ಳುತ್ತಾನೆ. ಈತ ದೆಹಲಿ ಸುಲ್ತಾನ ಅಲ್ಲಾವುದ್ದೀನ್ ಖಿಲ್ಜಿಯ ದಂಡನಾಯಕನಾಗಿದ್ದ. ಇವನು ಆಕ್ರಮಣದ ಸಮಯದಲ್ಲಿ ಗೋವಾ ಕದಂಬರ ರಾಜವಂಶದ ಅಡಿಯಲ್ಲಿ ಇತ್ತು. ಈ ಕದಂಬರು ನಮ್ಮ ಕರ್ನಾಟಕದ ಬನವಾಸಿ ಕದಂಬರ ಒಂದು ಬ್ರಾಂಚ್ ಆಗಿತ್ತು. ಇವನ ಆಕ್ರಮಣದ ಸಮಯದಲ್ಲಿ ಗೋವಾದಲ್ಲಿ ಇದ್ದ ಕದಂಬರ ಕುಲದೇವತೆ ಆದಂತ, ಇಂದಿನ ದಿವಾರ್ ನರ್ವಾದಲ್ಲಿ ಇರುವ ಸಪ್ತಕೋಟೇಶ್ವರ ದೇವಾಲಯವನ್ನು ಧ್ವಂಸಗೊಳಿಸುತ್ತಾನೆ. ಈ ಸಂದರ್ಭದಲ್ಲಿ ದೇವರ ವಿಗ್ರಹವನ್ನು ರಕ್ಷಿಸಲು ಒಂದು ಹೊಲದಲ್ಲಿ ಅದನ್ನು ಅಡಗಿಸಿ ಇಡಲಾಗಿತ್ತು. ಮಲ್ಲಿಕ್ ಕಾಫೂರ್ ದಾಳಿಯಿಂದ ತತ್ತರಿಸಿದ ಗೋವಾ ಜನರು ಊರು ಬಿಟ್ಟು ಕೊಡಬೇಕಾಗುತ್ತದೆ. ಆದರೆ ಮಲ್ಲಿಕ್ ಕಾಫೂರ್ ಕೈಯಲ್ಲಿ ದೀರ್ಘಕಾಲದ ವರೆಗೆ ಗೋವಾ ಇರೋದಿಲ್ಲ.
They fled to Chandor.
ದೆಹಲಿಯ ಸುಲ್ತಾನರ ಕೈಯಿಂದ ಗೋವಾ ಬಿಟ್ಟು ಹೋದ ನಂತರ ಮತ್ತೆ ಕದಂಬರು ಗೋವಾದ ಆಡಳಿತವನ್ನು ವಹಿಸಿಕೊಳ್ಳುತ್ತಾರೆ. ಹಾಗೆಯೇ ರಾಜ್ಯ ತೊರೆದ GSB ಹಾಗೂ ಇತರೆ ಜನಾಂಗಗಳು ಮರಳಿ ಗೋವಾಕ್ಕೆ ಬರುತ್ತವೆ. ಆದರೆ ಇನ್ನು ಇವರ ಕಹಾನಿ ಮುಗಿದಿರಲಿಲ್ಲ. ಇನ್ನೂ ಕೆಟ್ಟ ದಿನಗಳು ಗೋವಾಕ್ಕೆ ಬರಲು ಕಾಯ್ತಾ ಇದ್ದವು,
ಸ್ನೇಹಿತರೆ! ಅದು ಮೇ 29, 1453.
ಬಹುಶಃ ಗೋವಾದ ಜನರು ಅಂದು ತಾವಾಯ್ತು, ತಮ್ಮ ವ್ಯಾಪಾರ ಆಯ್ತು, ತಮ್ಮ ದೇವರು, ತಮ್ಮ ನಂಬಿಕೆ ಆಯ್ತು ಅಂತಾ, ಇನ್ನೇನು ಬೇಸಿಗೆ ಮುಗಿದು ಮಾನ್ಸೂನ್ ಬರುವ ದಾರಿಯನ್ನು ಕಾಯ್ತಾ ಇದ್ದರು ಇರಬೇಕು. ಆದರೆ ಅವರಿಗೆ ಮುಂಬರುವ ಚಂಡಮಾರುತದ ಸುಳಿವು ಕೂಡ ಇರಲಿಲ್ಲ, ದೂರದ ಟರ್ಕಿಯ Constantinople ಅಲ್ಲಿ ಏನು ನಡೆಯುತ್ತಿದೆ, ಅದು ಮುಂದೆ ನಮ್ಮ ಜೀವನವನ್ನು ಸಂಪೂರ್ಣ ಧ್ವಂಸ ಮಾಡುತ್ತೆ ಎಂಬ ಬಗ್ಗೆ ಸ್ವಲ್ಪವೂ ಸುಳಿವು ಇವರಿಗೆ ಇರಲಿಲ್ಲ.
ಹಾಗಾದರೆ ಆವತ್ತು ಏನಾಗಿತ್ತು? ಆವತ್ತು ಯೂರೋಪಿನ ಬೈಜಾಂಟೈನ್ ಸಾಮ್ರಾಜ್ಯ ಅಟೋಮನ್ ಟರ್ಕರ ಮುಂದೆ ಮಂಡಿಯೂರಿತ್ತು ಹಾಗೂ Constantinople ಅಂದ್ರೆ ಇಂದಿನ ಇಸ್ತಾಂಬುಲ್ ಸಂಪೂರ್ಣ ಪತನವಾಗಿತ್ತು. ಆದರೆ Constantinople ಪತನಕ್ಕೂ ಗೋವಾಗೂ ಏನ ಸಂಬಂಧ ಸ್ವಾಮಿ ಅಂತಾ ನೀವು ಕೇಳಬಹುದು. ಹೇಳ್ತೀವಿ ಕೇಳಿ. Constantinople ಎಂಬ ಪಟ್ಟಣ ಯುರೋಪ್ ಮತ್ತು ಏಷ್ಯಾ ನಡುವೆ ನಡೆಯುತ್ತಿದ್ದ ವ್ಯಾಪಾರಕ್ಕೆ ಒಂದು ಸೇತುವೆ ಆಗಿತ್ತು. ಸಿಲ್ಕ್ ರೂಟ್ ಕೂಡಾ ಈ ಮೂಲಕವೇ ಯೂರೋಪ್ಗೆ ತಲುಪುತ್ತಿತ್ತು. ಆದರೆ ಇಂತಹ ನಗರ 1453ರಲ್ಲಿ ಪತನವಾಗುತ್ತದೆ. ಈ ಮೂಲಕ ಅಟೋಮನ್ ಟರ್ಕರು ಏಷ್ಯಾಗೆ ಬರುವ ಈ ದಾರಿಯನ್ನು ಸಂಪೂರ್ಣ ಬಂದ್ ಮಾಡ್ತಾರೆ. ಯುರೋಪಿಗೆ ಹೋಗುವ ಮಸಾಲೆ, ರೇಷ್ಮೆ, ಹತ್ತಿ ಬಟ್ಟೆ, ಐಷಾರಾಮಿ ವಸ್ತುಗಳು ಸಂಪೂರ್ಣ ನಿಂತುಹೋಗುತ್ತದೆ. ಈ ಸಂದರ್ಭದಲ್ಲಿ ಯುರೋಪಿಗೆ ಪರ್ಯಾಯ ದಾರಿಯನ್ನು ಹುಡುಕಲೇ ಬೇಕಾಗುತ್ತದೆ. ಆಗಲೇ ಒಂದು ಹೆಸರು ಕೇಳಿಬರುತ್ತದೆ. ಅದೇ ವಾಸ್ಕೋ ಡ ಗಾಮಾ. ಭಾರತಕ್ಕೆ ಸಮುದ್ರ ಮಾರ್ಗವನ್ನು ತಾನು ಹುಡುಕಿಕೊಂಡು ಬರ್ತಿನಿ ಅಂತಾ ಹೇಳಿ ಹೊರಟಿದ್ದು ಇದೇ ಗೋವಾ ಆಳಿದ್ದ ಪೋರ್ಚುಗಲ್ ನಿಂದ. ಅಂದಿನ ಪೋರ್ಚುಗಲ್ ದೊರೆ ಒಂದನೇ ಮ್ಯಾನುಯೆಲ್ ನಿಂದ ಅನುಮತಿ ಪಡೆದು ಹೊರಡುತ್ತಾನೆ.
ಈತ ಆವತ್ತು ಸಾವೊ ಗೇಬ್ರಿಯಲ್, ಸಾವೊ ರಾಫೆಲ್, ಬೆರಿಯೊ ಎಂಬ ಪ್ರಯಾಣದ ಹಡಗು ಹಾಗೂ ಒಂದು ಸರಕು ಹಡಗನ್ನು ತೆಗೆದುಕೊಂಡು 1497, ಜುಲೈ 8ರಂದು ಪೋರ್ಚುಗೀಸ್ ನಿಂದ ತನ್ನ ಪ್ರಯಾಣ ಆರಂಭ ಮಾಡ್ತಾನೆ. ಇವನ ಈ ಪ್ರಯಾಣ 22ನೇ ನವೆಂಬರ್, 1497ರಲ್ಲಿ ಆಫ್ರಿಕಾದ ಕೇಪ್ ಆಫ್ ಗುಡ್ ಹೋಪ್ ಅನ್ನು ತಲುಪಿತ್ತು, ಮೊದಲು ಇದನ್ನೇ ಭಾರತ ಎಂದು ಅಂದುಕೊಂಡಿದ್ದ ವಾಸ್ಕೋ ಡ ಗಾಮಾ. ಆದರೆ ಇದು ಭಾರತವಲ್ಲ ಎಂದು ಮುಂದೆ ಈತನಿಗೆ ತಿಳಿಯುತ್ತದೆ. ಹಾಗೆ ಕಷ್ಟಕರ ಪ್ರಯಾಣವನ್ನು ಮುಂದುವರೆಸುತ್ತಾ ಈತ ಮಲಿಂಡಿಗೆ 1498ರಲ್ಲಿ ತಲುಪುತ್ತಾನೆ. ಈ ಮಲಿಂಡಿ ಅಂದ್ರೆ ಇಂದಿನ ಕೀನ್ಯಾ. ಆ ಸಂದರ್ಭದಲ್ಲಿ ಕೀನ್ಯಾದ ಸುಲ್ತಾನನ ಬಳಿ ಭಾರತಕ್ಕೆ ದಾರಿ ಕೇಳ್ತಾನೆ ಈ ವಾಸ್ಕೋ ಡಿ ಗಾಮಾ. ಆಗ ಗಾಮಾಗೆ ಪರಿಚಯವಾಗುವದೇ ಒಬ್ಬ ಅರಬ್ ನಾವಿಕ ಹಾಗೂ ಭಾರತದ ಸಾಗರ ಮತ್ತು ಮಾನ್ಸೂನ್ ಬಗ್ಗೆ ಮಾಹಿತಿ ಇದ್ದ ಇಬ್ನ್ ಮಜೀದ್ ಅನ್ನೋ ವ್ಯಕ್ತಿ ಸಿಗ್ತಾನೆ. ಈತ ವಾಸ್ಕೋ ಡಿ ಗಾಮಾ ಗೆ ಭಾರತದ ಸಮುದ್ರ ಮಾರ್ಗವನ್ನು ತೋರಿಸುತ್ತಾನೆ. ಮುಂದೆ ಕೊಚ್ಚಿಯ ನಾವಿಕ ಕಂಜಿ ಮಾಲಂ ಎಂಬಾತ ಕಲ್ಲಿಕೋಟೆ ಗೆ ವಾಸ್ಕೋ ಡಿ ಗಾಮಾ ನನ್ನು ತಲುಪಿಸುತ್ತಾನೆ ಎಂದು ಇತಿಹಾಸಕಾರರು ಊಹೆ ಮಾಡ್ತಾರೆ. ಅದೇನು ಇದ್ದರೂ ಭಾರತದ ನೆಲದ ಮೇಲೆ ಪೋರ್ಚುಗೀಸರ ಮೊದಲ ಹೆಜ್ಜೆ ಬಿದ್ದಿತ್ತು. ಅದು 1498ರ ಮೇ, 29.
ಅಂದು ಹಾಗಾದರೆ ಗೋವಾ ಹಾಗೂ ಭಾರತ ಹೇಗಿತ್ತು? ಯಾರು ಎಲ್ಲಿ ಆಳ್ವಿಕೆ ಮಾಡ್ತಾ ಇದ್ದರು?
ಅಂದು ಉತ್ತರ ಭಾರತದಲ್ಲಿ ಅಂದು ದೆಹಲಿ ಸುಲ್ತಾನರು ಆಳ್ವಿಕೆ ಇತ್ತು, ಸಿಕಂದರ್ ಲೋಧಿ ಅಂದಿನ ಸುಲ್ತಾನನಾಗಿದ್ದ. ಇದೊಂದೇ ಅಂದು ಉತ್ತರ ಭಾರತದಲ್ಲಿ ಇದ್ದ ಮುಖ್ಯ ರಾಜವಂಶ. ಇನ್ನು ನಾವು ದಕ್ಷಿಣಕ್ಕೆ ಬಂದರೆ 1498ರಲ್ಲಿ ವಿಜಯನಗರ ಸಾಮ್ರಾಜ್ಯ ಅತ್ಯಂತ ದೊಡ್ಡ ಹಾಗೂ ಪ್ರಬಲ ಶಕ್ತಿಯಾಗಿತ್ತು. ಈ ಸಂದರ್ಭದಲ್ಲಿ ಸಾಳ್ವ ಎರಡನೇ ನರಸಿಂಹ ರಾಯ ಆಳ್ವಿಕೆ ನಡೆಸುತ್ತಿದ್ದ, ಆದರೆ ನಿಜವಾದ ಪವರ್ ತುಳುವ ನರಸ ನಾಯಕರ ಬಳಿ ಇತ್ತು. ಆಡಳಿತ ಸಾಳ್ವ ವಂಶದಿಂದ ತುಳುವ ವಂಶದತ್ತ ವಾಲುತ್ತಿದ್ದ ಕಾಲ ಅದಾಗಿತ್ತು. ಆದರೆ ವಿಜಯನಗರದತ್ತ ಬೆರಳು ಮಾಡುವ ಧೈರ್ಯ ಯಾರಿಗೂ ಇರಲಿಲ್ಲ. ಇದೇ ಸಂದರ್ಭದಲ್ಲಿ ಬಹಮನಿ ಸುಲ್ತಾನರು ಐದು ಪ್ರತ್ಯೇಕ ಸುಲ್ತಾನಶಾಹಿಗಳಾಗಿ ಆಳ್ವಿಕೆ ನಡೆಸುತ್ತಿದ್ದರು. ಕೇರಳದಲ್ಲಿ ಕ್ಯಾಲಿಕಟ್ ಅಲ್ಲಿ ಝಮೊರಿನ್ ಆಡಳಿತ ನಡೆಸುತ್ತಿದ್ದರೆ, ಕೊಚ್ಚಿ ರಾಜ್ಯದಲ್ಲಿ ಉನ್ನಿ ಕಿಣಿ ಎಂಬ ರಾಜ ಆಡಳಿತ ನಡೆಸುತ್ತಿದ್ದ ಇದರೊಂದಿಗೆ ಕೊಲ್ಲಂ ಅಂದ್ರೆ ಇಂದಿನ ಕ್ವಿಲಾನ್ ಕೂಡ ಕೇರಳದಲ್ಲಿ ಒಂದು ಪ್ರತ್ಯೇಕ ರಾಜ್ಯವಾಗಿತ್ತು .
ವಾಸ್ಕೋಡ ಗಾಮಾ ಭಾರತಕ್ಕೆ ಬಂದ ಸಂದರ್ಭದಲ್ಲಿ ಗೋವಾ ಬಿಜಾಪುರ ಆದಿಲ್ ಶಾಹಿ ಸುಲ್ತಾನರ ಆಡಳಿತದಲ್ಲಿ ಇತ್ತು. ಯುಸುಫ್ ಆದಿಲ್ ಖಾನ್ ಅಂದು ಗೋವಾವನ್ನು ನಿಯಂತ್ರಿಸುತ್ತಿದ್ದ. ಇತ್ತ ನಮ್ಮ ಕರ್ನಾಟಕದ ಕರಾವಳಿ ಭಾಗದಲ್ಲಿ ಸಾಮಂತ ರಾಜರಾದ ಕೆಳದಿ ನಾಯಕರು, ಹೊನ್ನಾವರ ನಾಯಕರು, ಬಂಗಾ ಅರಸರು, ಮತ್ತು ಚೌಟ ಅರಸರು, ವಿಜಯನಗರ ಸಾಮ್ರಾಜ್ಯದ ಅಡಿಯಲ್ಲಿ ಆಳ್ವಿಕೆ ನಡೆಸುತ್ತಿದ್ದರು.
ಹಾಗಾದರೆ ಕೇವಲ ನಾಲ್ಕು ಹಡಗಿನ ಮೂಲಕ ಭಾರತಕ್ಕೆ ಬಂದಿದ್ದ ಪೋರ್ಚುಗೀಸರು ಗೋವಾವನ್ನು ಆಕ್ರಮಿಸಿಕೊಂಡಿದ್ದು ಹೇಗೆ?
ಪೋರ್ಚುಗೀಸ್ ನಾವಿಕ ವಾಸ್ಕೋ ಡಿ ಗಾಮಾನ ಸ್ವಾಗತವನ್ನು ಅಂದಿನ ಕ್ಯಾಲಿಕಟ್ ದೊರೆ ಝಮೊರಿನ್ ಮಾಡಿದ್ದ, ಆದರೆ ಈ ಮೊದಲ ಭೇಟಿ ಇವರಿಬ್ಬರ ಮಧ್ಯೆ ಅಷ್ಟೊಂದೇನು ಖಾಸ್ ಆಗಿರಲಿಲ್ಲ. ಬರೀ ಚಿನ್ನ, ಬೆಳ್ಳಿ, ವಜ್ರದ ಉಡುಗೊರೆಗಳನ್ನು ಕಂಡಿದ್ದ ಭಾರತೀಯ ರಾಜರಿಗೆ, ಈ ನಾವಿಕ ತಂದ ಬಟ್ಟೆ ಮತ್ತು ಲೋಹದ ವಸ್ತುಗಳು ತೃಪ್ತಿ ತರಲಿಲ್ಲ. ಇದರೊಂದಿಗೆ ಅಂದು ಮಸಾಲಾ ವ್ಯಾಪಾರದ ಮೇಲೆ ಹಿಡಿತ ಹೊಂದಿದ್ದ ಅರಬರಿಗೆ ಪೋರ್ಚುಗೀಸರ ಆಗಮನ ಖುಷಿ ನೀಡಲಿಲ್ಲ. ಹಾಗಂತ ಮೊದಲ ಭೇಟಿಯಲ್ಲಿಯೇ ಪೋರ್ಚುಗೀಸರು ಭಾರತದ ರಾಜ್ಯದೊಂದಿಗೆ ವ್ಯವಹಾರ ಒಪ್ಪಂದ ಮಾಡಿಕೊಂಡು ಹೋಗಲಿಲ್ಲ. ವಾಸ್ಕೋ ಡಿ ಗಾಮಾ ಭಾರತವನ್ನು ಬಿಟ್ಟು ಹೋಗುವಾಗ ಅವನ ಹತ್ತಿರ ಇದ್ದ ಸರಕುಗಳು ಎಂದರೆ ಕಾಳುಮೆಣಸು, ದಾಲ್ಚಿನ್ನಿ ಅಂತಹ ಕೆಲವು ಮಸಾಲೆ ಪದಾರ್ಥಗಳು ಮತ್ತು ಇನ್ನಿತರ ವಸ್ತುಗಳು ಅಷ್ಟೇ. ಈ ಭೇಟಿ ಪೋರ್ಚುಗೀಸ್ ಪಾಲಿಗೆ ಹೇಳಿಕೊಳ್ಳುವ ಲಾಭವೇನು ತಂದು ಕೊಡಲಿಲ್ಲ. ಆದರೆ ಭಾರತಕ್ಕೆ ಒಂದು ಸಮುದ್ರ ಮಾರ್ಗ ತಂದು ಕೊಟ್ಟಿತ್ತು ಈ ಭೇಟಿ. ಹಾಗೆಯೇ ಇಲ್ಲಿಯ ರಾಜಕೀಯ ವ್ಯವಸ್ಥೆಯನ್ನು ಚೆನ್ನಾಗಿ ತಿಳಿದುಕೊಂಡು ಹೋಗಿದ್ದ ವಾಸ್ಕೋ ಡಿ ಗಾಮಾ.
1498ರ ಅಗಸ್ಟ್ ಅಲ್ಲಿ ಭಾರತದಿಂದ ಹೊರಟ ಗಾಮಾಗೆ ದಾರಿ ಮಧ್ಯೆ ಮಾನ್ಸೂನ್ ಮಾರುತಗಳೊಂದಿಗೆ ಹೋರಾಡಬೇಕಾಯ್ತು, ಆಹಾರದ ಕೊರತೆ ಆಗುತ್ತೆ, ಅವನ ಜೊತೆ ಬಂದ ಇತರ ನಾವಿಕರು ಸಾಯ್ತಾರೆ ಹಾಗೂ ಕೊನೆಗೂ 1499ರ ಅಗಸ್ಟ್ ಅಲ್ಲಿ ಪೋರ್ಚುಗಲ್ ರಾಜಧಾನಿ ಲಿಸ್ಬನ್ ತಲುಪುತ್ತಾನೆ ವಾಸ್ಕೋ ಡಿ ಗಾಮಾ. ಭಾರತದಲ್ಲಿ ಗೌರವವೇನೂ ಸಿಗಲಿಲ್ಲ, ಆದ್ರೆ ಭಾರತದಿಂದ ತಂದ ವಸ್ತುಗಳಿಂದ ಭಾರೀ ಲಾಭವಂತೂ ಸಿಗ್ತು. ವಾಸ್ಕೋ ಡಿ ಗಾಮಾ ಒಂದಕ್ಕೆ ಹತ್ತು ಪಟ್ಟು ಹೆಚ್ಚು ಲಾಭ ಪಡೆದ ಹಾಗೂ ಈ ಲಾಭ ಅವನ ಭಾರತದ ಮೇಲಿನ ಮೋಹವನ್ನು ಹೆಚ್ಚಿಸುತ್ತದೆ. ಈ ಮೋಹ ವಾಸ್ಕೋ ಡಿ ಗಾಮಾ ಗೆ ಮತ್ತೊಮ್ಮೆ ಭಾರತಕ್ಕೆ ಕರೆದುಕೊಂಡು ಬರುತ್ತದೆ. ಮನುಷ್ಯ ಆಸೆ ಪಡೋದೆ ತಪ್ಪು ಎನ್ನುತ್ತಾರೆ, ಆದರೆ ವಾಸ್ಕೋ ಡಿ ಗಾಮಾ ಗೆ ಅತಿಯಾಸೆ ಬಂದಿತ್ತು. ಅಂತೂ ಭಾರತಕ್ಕೆ ಎರಡನೇ ಭಾರೀ ಬಂದಿದ್ದ ವಾಸ್ಕೋ ಡಿ ಗಾಮಾ. ಹಾಗಾದರೆ ಈ ಬಾರೀ ಕೂಡ ಹಿಂದಿನ ಸಲ ಬಂದ ಹಾಗೆಯೇ ಬಂದಿದ್ನಾ? ಇಲ್ಲ!
ವಾಸ್ಕೋಡಿ ಗಾಮಾನ ಎರಡನೇ ಭೇಟಿ ಮೊದಲ ಭೇಟಿಯಂತೆ ಕೇವಲ ದಾರಿ ಹುಡುಕುವುದು ಆಗಿರಲಿಲ್ಲ. ಮೊದಲ ಭೇಟಿಯಲ್ಲಿಯೇ ಗಾಮಾಗೆ ತಿಳಿದಿತ್ತು, ಹಿಂದೂ ಮಹಾಸಾಗರದಲ್ಲಿ ಬೆಳೆಯಬೇಕು ಎಂದರೆ ಅರಬರನ್ನು ಎದುರಿಸಲೇ ಬೇಕು ಎಂದು. ಅಷ್ಟೇ ಅಲ್ಲದೆ ಭಾರತದಿಂದ ಭಾರೀ ಪ್ರಮಾಣದಲ್ಲಿ ಸರಕುಗಳನ್ನು ಪೋರ್ಚುಗೀಸ್ ಗೆ ಕೊಂಡೊಯ್ಯಬೇಕಿತ್ತು. ಮೊದಲ ಬಾರಿ ಕೇವಲ ನಾಲ್ಕು ಸಾಮಾನ್ಯ ಹಡಗುಗಳನ್ನು ತನ್ನೊಟ್ಟಿಗೆ ತಂದಿದ್ದ ಗಾಮಾ, ಈ ಬಾರಿ 20 ಯುದ್ಧ ನೌಕೆಗಳು ಹಾಗೂ ಭಾರೀ ಸೈನಿಕರನ್ನು ತೆಗೆದುಕೊಂಡು ಬಂದಿದ್ದ. ಯುದ್ಧ ನೌಕೆಗಳು? ಅಂದ್ರೆ ಈ ಬಾರಿ ಕೇವಲ ಮಸಾಲೆ ಪದಾರ್ಥಗಳನ್ನು ಹೊತ್ತೊಯ್ಯುವ ಯೋಚನೆಯಲ್ಲಿ ಈತ ಬಂದಿರಲಿಲ್ಲ ಅಂತಾ ಸಂಪೂರ್ಣವಾಗಿ ಗೊತ್ತಾಗುತ್ತದೆ. ಈತ ಬಂದವನೇ ಕ್ಯಾಲಿಕಟ್ ದೊರೆ ಝಮೊರಿನ್ ಬಳಿ ಹೋಗಿ ತಮ್ಮ ವ್ಯಾಪಾರಕ್ಕೆ ಅನುಮತಿ ಬೇಕು ಹಾಗೆ ಅರಬರು ಹಿಂದೂ ಮಹಾಸಾಗರದಲ್ಲಿ ಕಾಣಬಾರದು ಎಂದು ಹೇಳ್ತಾನೆ. ಆದ್ರೆ ಝಮೊರಿನ್ ಪೋರ್ಚುಗೀಸರ ಮಾತಿಗೆ ಸೊಪ್ಪು ಹಾಕುವುದಿಲ್ಲ. ಹಾಗೆ ಪೋರ್ಚುಗೀಸರ ದುರಹಂಕಾರವನ್ನು ಝಮೊರಿನ್ ಅದಾಗಲೇ ಅಳೆದಿದ್ದ. ಈ ಸಮಯದಲ್ಲಿ ಝಮೊರಿನ್ ಅರಬರಿಗೆ ಸಾಥ್ ನೀಡುತ್ತಾನೆ. ಆದರೆ ಮೊದಲಬಾರಿಗೆ ಭಾರತಕ್ಕೆ ಬಂದಾಗಲೇ ಈತ ಭಾರತದ ರಾಜಕೀಯ ವ್ಯವಸ್ಥೆಯನ್ನು ನೋಡಿಕೊಂಡು ಹೋಗಿದ್ದ, ಇಲ್ಲಿಯ ಒಡಕುಗಳು ಅವನಿಗೆ ಗೊತ್ತಿತ್ತು. ಝಮೊರಿನ್ ಒಲ್ಲೆ ಅಂದ ತಕ್ಷಣ ವಾಸ್ಕೋ ಡಿ ಗಾಮಾ ಕೊಚ್ಚಿ ರಾಜ್ಯಕ್ಕೆ ಹೋಗ್ತಾನೆ. ಯಾಕೆಂದ್ರೆ ಅಂದು ಕ್ಯಾಲಿಕಟ್ ಹಾಗೂ ಕೊಚ್ಚಿ ರಾಜ್ಯಗಳು ಬದ್ದವೈರಿಗಳಾಗಿದ್ದರು. ಝಮೊರಿನ್ ನಿಂದ ತಿರಸ್ಕರಿಸಲ್ಪಟ್ಟವರು ಎಂದು ತಿಳಿದ ಕೊಚ್ಚಿ ರಾಜ ತಿರುಮಲ, ವಾಸ್ಕೋ ಡಿ ಗಾಮಾ ಗೆ ಸಹಾಯ ಮಾಡ್ತಾನೆ. ಹಾಗೂ ಅರಬರಿಗೆ ಮತ್ತು ಪೋರ್ಚುಗೀಸರಿಗೆ ಸಾಗರ ಯುದ್ಧ ನಡೆಯುತ್ತೆ. ಪೋರ್ಚುಗೀಸ್ ಸೇನೆ ಜಯ ಸಾಧಿಸುತ್ತೆ ಹಾಗೂ ಇತ್ತ ಝಮೊರಿನ್ ಕೂಡ ಸೋಲು ಕಾಣುತ್ತಾನೆ. ಹಾಗೂ ಸೋತ ಝಮೊರಿನ್ ಈಗ ಒಬ್ಬ ಕನ್ನಡದ ವೀರ ಮಹಿಳೆಯ ಸಹಾಯ ಪಡೆಯುತ್ತಾನೆ. ಹಾಗಾದರೆ ಆ ರಾಣಿ ಯಾರು? ಕನ್ನಡ ಕರಾವಳಿಯಲ್ಲಿ ಈಗಲೂ ಯಾಕೆ ಆಕೆಯನ್ನು ನೆನೆಯುತ್ತಾರೆ? ಆಕೆಯ ದಿಟ್ಟತನ ಎಂತಹದ್ದು ಎಂಬ ಬಗ್ಗೆ ಮುಂದೆ ನೋಡೋಣ.
ಒಟ್ಟಿನಲ್ಲಿ ಪೋರ್ಚುಗೀಸರು ಈ ಗೆಲುವಿನ ನಂತರ ಮಲಬಾರ್ ತೀರದಲ್ಲಿ ತಮ್ಮ ವ್ಯಾಪಾರ ಕೇಂದ್ರಗಳನ್ನು ಸ್ಥಾಪನೆ ಮಾಡ್ತಾರೆ. 1500ರಲ್ಲಿ ಕೊಚ್ಚಿಯಲ್ಲಿ ತಮ್ಮ ಮೊದಲ ವ್ಯಾಪಾರ ಕೇಂದ್ರವನ್ನು ಪೆಡ್ರೊ ಅಲ್ವಾರೆಸ್ ಕ್ಯಾಬ್ರಾಲ್ ಎಂಬ ತಮ್ಮ ಸೇನಾ ಕಮಾಂಡರ್ ಮೂಲಕ ಸ್ಥಾಪನೆ ಆಗುತ್ತೆ. ನಂತರ ಇದೇ ಕೊಚ್ಚಿಯಲ್ಲಿ 1503ಕ್ಕೆ ಮೊದಲ ಪೋರ್ಚುಗೀಸ್ ಪೋರ್ಟ್ ಅನ್ನು ಸ್ಥಾಪನೆ ಮಾಡ್ತಾರೆ, ಇದೇ ಪೋರ್ಟ್ ಮ್ಯಾನುಯೆಲ್. ಇದರ ನಂತರ 1505ಅಲ್ಲಿ ಕೊಚ್ಚಿ ಹತ್ತಿರದ ಕಣ್ಣೂರಿನಲ್ಲಿ ಇನ್ನೊಂದು ಕೋಟೆಯನ್ನು ಕಟ್ತಾರೆ ಈ ಪೋರ್ಚುಗೀಸರು. ಆದರೆ ಇನ್ನು ಗೋವಾ ಕಡೆ ಬಂದಿರಲಿಲ್ಲ ಪೋರ್ಚುಗೀಸರು. ಎರಡನೇ ಬಾರಿ ಭಾರತಕ್ಕೆ ಬಂದಿದ್ದ ವಾಸ್ಕೋ ಡಿ ಗಾಮಾ 1503 ಅಗಸ್ಟ್ ಅಲ್ಲಿ ಮತ್ತೆ ಮರಳಿ ಪೋರ್ಚುಗಲ್ ಗೆ ಹೋಗ್ತಾನೆ. ಈ ಬಾರಿ ಹೊದ ಸಲದ ಲಾಭಕ್ಕಿಂತ ಅತಿ ಹೆಚ್ಚು ಲಾಭ ಹೊಂದುತ್ತಾನೆ ಗಾಮಾ.
ಪೋರ್ಚುಗೀಸರು ತಮ್ಮ ವ್ಯಾಪಾರ ಕೇಂದ್ರಗಳನ್ನು ನೋಡಿಕೊಳ್ಳಲು ಹಾಗೂ ಇಲ್ಲಿ ಯಾವುದೇ ತೊಂದರೆ ಆಗದಂತೆ ನಿಗಾ ವಹಿಸಲು ಗವರ್ನರ್ ಎಂಬ ಅಧಿಕಾರಿಗಳನ್ನು ನೇಮಿಸಿದರು. ಇದರಲ್ಲಿ ಮೊದಲು ಬರುವ ಹೆಸರೇ, Francisco de Almeida. 1505ರಿಂದ 1509ರ ತನಕ ಗವರ್ನರ್ ಆಗಿದ್ದ ಈತ ಒಂದು policy ಅನ್ನು ತಂದ, ಅದೇ Blue Water Policy. ಇದರ ಪ್ರಕಾರ ಅರೇಬಿಯನ್ ಸಮುದ್ರದ ಮೇಲೆ ಸಂಪೂರ್ಣ ತಮ್ಮದೇ ಅಧಿಪತ್ಯ ಇದೆ ಎಂದು ಹೇಳಿದ್ದ ಈ Almeida. ಇದು ಅರಬ್ ವ್ಯಾಪಾರಿಗಳನ್ನು ಮಾತ್ರ ಅಲ್ಲದೆ ಭಾರತದ, ಅದರಲ್ಲೂ ಗುಜರಾತಿನ ವ್ಯಾಪಾರಿಗಳಿಗೆ ತುಂಬಾ ತೊಡಕಾಗಿತ್ತು. ಯಾಕೆಂದರೆ ಈ ನೀತಿ ಭಾರತೀಯ ನೌಕಾಪಡೆ ಅರೇಬಿಯನ್ ಸಮುದ್ರವನ್ನು ದಾಟಬೇಕಾದರೆ ಪೋರ್ಚುಗೀಸರ ಅನುಮತಿಯನ್ನು ಪಡೆಯುವ ಮಟ್ಟಕ್ಕೆ ತಂದು ನಿಲ್ಲಿಸಿತು.
ಇದರೊಂದಿಗೆ ಪೋರ್ಚುಗೀಸ್ ಬಿಟ್ಟು ಬೇರೆ ವಿದೇಶಿ ವ್ಯಾಪಾರಿಗಳೊಂದಿಗೆ ವ್ಯಾಪಾರಿಗಳೊಂದಿಗೆ ವ್ಯಾಪಾರ ಮಾಡುವ ಹಾಗೆ ಇರಲಿಲ್ಲ. ಹಾಗೆ ಭಾರತೀಯ ವ್ಯಾಪಾರಿಗಳು ಕೂಡ ಕಾರ್ಟಾಜ್ ಎಂಬ ತೆರಿಗೆ ಹಾಗೂ ಪರವಾನಿಗೆ ಪಡೆಯಬೇಕಿತ್ತು. ಇವನ ನಂತರ ಬರೋದೆ Afonso de Albuquerque. ಏನು ಹೇಳ್ತಾ ಇದಿರಾ. ಇನ್ನು ತನಕ ಗೋವಾಕ್ಕೆ ಬರಲಿಲ್ಲ ಅಲ್ಲ ಅಂತಾ ನೀವು ಯೋಚನೆ ಮಾಡ್ತಾ ಇದ್ದರೆ, ಕ್ಷಮಿಸಿ. ಯಾಕೆಂದರೆ ಈ ವ್ಯಕ್ತಿ ಎಂಟ್ರಿ ಆಗದೆ ಗೋವಾಕ್ಕೆ ಬರೋದಾದ್ರು ಹೇಗೆ ಹೇಳಿ. Albuquerque ಪೋರ್ಚುಗೀಸರ ಎರಡನೇ ಗವರ್ನರ್. ಗೋವಾದ ಸಂಪೂರ್ಣ ಇತಿಹಾಸ ಬದಲಿಸಿದ್ದೇ ಅಲ್ಬುಕರ್ಕ್. ಒಬ್ಬ ನಿರಂಕುಶ ಗವರ್ನರ್. ಅಂದ್ರೆ ಡಿಕ್ಟೇಟರ್.
ಅದು 1510. ಬಿಜಾಪುರ ಸುಲ್ತಾನರ ವಂಶದ ಆಡಳಿತದಲ್ಲೇ ಇದ್ದ ಗೋವಾ ಒಂದು ಪ್ರಮುಖ ವಾಣಿಜ್ಯ ಬಂದರಾಗಿತ್ತು. ಗೋವಾವನ್ನು ಈ Albuquerque ಹೇಗೆ ವಶ ಪಡಿಸಿಕೊಂಡಾ ಅಂತಾ ನಿಮಗೆ ಗೊತ್ತಾ? He attacked on Goa. 1510. But, ನಿನ್ನೆ ಮೊನ್ನೆ ಬಂದ ಪೋರ್ಚುಗೀಸ್, ಭಾರತದ ದಖ್ಖನ್ ನಿಂದ ಪಶ್ಚಿಮದ ಕರಾವಳಿ ತನಕ ಪಸರಿಸಿಕೊಂಡಿದ್ದ ಪ್ರಬಲ ಬಿಜಾಪುರ ಸುಲ್ತಾನರನ್ನು ಹಿಮ್ಮೆಟ್ಟಿಸಿ ಗೋವಾ ಪಡಿತು ಅಂದ್ರೆ, ಹೇಗೆ? ವಿಜಯನಗರ ಸಾಮ್ರಾಜ್ಯಕ್ಕೆ ಟಕ್ಕರ್ ಕೊಡುವ ತಾಕತ್ತು ಇರುವ ಬಿಜಾಪುರ ಸುಲ್ತಾನರು, ಒಂದು ಚಿಕ್ಕ ಪೋರ್ಚುಗೀಸರಿಗೆ ಸೋಲುತ್ತಾ?
ಹಾಗಾದರೆ ಆವತ್ತು ಯಾರೂ ಪೋರ್ಚುಗೀಸರಿಗೆ ಸಹಾಯ ಮಾಡಿದ್ರು? ಇತಿಹಾಸದ ಪುಟಗಳಲ್ಲಿ ಮರೆಮಾದ ಆ ಹೆಸರು ಯಾರದ್ದು? ವಿಜಯನಗರ ಸಾಮ್ರಾಜ್ಯದ ಆ ಮಹಾನ್ ಚಕ್ರವರ್ತಿ ಇದನ್ನು ಸುಮ್ಮನೆ ನೋಡ್ತಾ ಕೂತನಾ? ಗೋವಾದ ಪತನ ಕ್ರಿಶ್ಚಿಯನ್ ಮಿಷನರಿಗಳ ಬರೋದಕ್ಕೆ ಕಾರಣವಾಯ್ತಾ? ಗೋವಾ ಬ್ರಾಹ್ಮಣರನ್ನು ಮತಾಂತರ ಮಾಡಿದ ಒಳ ಸತ್ಯಗಳು ಏನು? ತಮ್ಮ ದೇವರನ್ನು ಹಾಗೂ ತಮ್ಮ ಕುಟುಂಬವನ್ನು ಕಟ್ಟಿಕೊಂಡು ಇದೇ GSB ಸಮುದಾಯ ಉಟ್ಟಬಟ್ಟೆಯಲ್ಲೇ ಗೋವಾ ತೊರೆದಿದ್ದು ಯಾಕೆ? ಪೋರ್ಚುಗೀಸರಿಗೆ ಸಿಂಹ ಸ್ವಪ್ನವಾದ ಆ ಎರಡು ರಾಣಿಯರು ಯಾರು? ಗೋವಾ ಸ್ವಾತಂತ್ರ್ಯ ಸಿಕ್ಕಿದ್ದು ಹೇಗೆ? ಇವೆಲ್ಲದರ ಉತ್ತರಕ್ಕಾಗಿ ಕಾಯ್ತಾ ಇರಿ.
🎥 Watch now to uncover the untold truth of Goa’s freedom struggle — a story of betrayal, resilience, and ultimate liberation.














